ಗಾಂಧಿಜಯಂತಿ
ನಮ್ಮ
ಶಾಲೆಯಲ್ಲಿ ಗಾಂಧಿಜಯಂತಿಯನ್ನು
ವಿಶೇಷವಾಗಿ ಆಚರಿಸಲಾಯಿತು.ಶಾಲಾ
ಮುಖ್ಯೋಪಾಧ್ಯಾಯರು ಗಾಂಧೀಜಿಯವರ
ಛಾಯಾಚಿತ್ರದ ಮುಂದೆ ದೀಪವನ್ನು
ಬೆಳಗಿಸಿದರು.
ವಿದ್ಯಾರ್ಥಿಗಳು
ವಂದೇಮಾತರಂ ಹಾಡಿಗರು.ಮುಖ್ಯೋಪಾಧ್ಯಾಯರಾದ
ವಿ.ಶ್ರೀಕಾಂತ.ಇವರು
ಪ್ರಾಸ್ತಾವಿಕವಾಗಿ ಮಾತನಾಡುತ್ತಾ
ದಿನಾಚರಣೆಯ ಮಹತ್ವವನ್ನು
ವಿವರಿಸಿದರು.ಅಧ್ಯಾಪಕರಾದ
ಶ್ರೀ ವಿಘ್ನೇಶ್ವರ.ಕೆದುಕೋಡಿಯವರು
ಗಾಂಧೀಜಿಯವರ ಸತ್ಯಸಂಧತೆ,ಸರಳ
ಜೀವನಕ್ರಮ,ದೇಶಸೇವೆ,ಸತ್ಯಾಗ್ರಹ,ಇತ್ಯಾದಿ
ವಿಚಾರಗಳ ಬಗ್ಗೆ ಮಕ್ಕಳಿಗೆ
ಮನದಟ್ಟು ಮಾಡಿದರು.ಅನಂತರ
ಎಲ್ಲರೂ ಗಾಂಧೀಜಿಯವರ ಭಾವ ಚಿತ್ರಕ್ಕೆ
ಪುಷ್ಪಾರ್ಪಣೆಗೈದು ವಂದಿಸಿದರು.
ಶುಚೀಕರಣ
ಯಜ್ಙಕ್ಕೆ ಚಾಲನೆ ನೀಡಲಾಯಿತು.ಶಾಲಾ
ಪರಿಸರವನ್ನು ಶುಚಿಗೊಳಿಸಲಾಯಿತು.
No comments:
Post a Comment