ಶ್ರೀ
ದುರ್ಗಾಪರಮೇಶ್ವರೀ ಎ.ಯು.ಪಿ.
ಶಾಲೆಯ2014-15ನೇ
ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು
ತಾ.27-7-2014ನೇ
ಆದಿತ್ಯವಾರ ನಮ್ಮ ಶಾಲೆಯಲ್ಲಿ
ಜರಗಿತು. ಆರಂಭದಲ್ಲಿ
ಶೈಕ್ಷಣಿಕ ವಿಚಾರಗಳ ಬಗ್ಗೆ
ಚರ್ಚಿಸಲಾಯಿತು. ಶಾಲೆಯ
ಮೂಲ ಸೌಕರ್ಯಗಳ ಅಭಿವೃಧ್ದಿಯ
ಬಗ್ಗೆ ಯೂ ಸಲಹೆ ಸೂಚನೆಗಳನ್ನು
ನೀಡಿದರು. ಸ್ವಾತಂತ್ರ್ಯ
ದಿನಾಚರಣೆಯ ಬಗ್ಗೆ ಪ್ರಸ್ತಾಪಿಸಿದಾಗ
ಅದ್ದೂರಿಯಾಗಿ ಆಚರಿಸುವ ತೀರ್ಮಾನ
ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ನೂತನ
ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ
ರವೀಶ್.ಭಟ್.ಆಟಿಕುಕ್ಕೆ
,. MPTA ಅಧ್ಯಕ್ಷರಾಗಿ
ಶ್ರೀಮತಿ ಸೀತಾರವರು ಆಯ್ಕೆ
ಗೊಂಡರು. ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀಕಾಂತ.ವಿ
ಸ್ವಾಗತಿಸಿ ಅಧ್ಯಾಪಕರಾದ ವಿಘ್ನೇಶ್ವರ
ಕೆದುಕೋಡಿ ವಂದಿಸಿದರು.