news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Sunday 16 November 2014


 ರಕ್ಷಕರ ಸಮ್ಮೇಳನ ಹಾಗೂ ಗಣಿತೋತ್ಸವ 2014-15
ಉದ್ಘಾಟನಾ ಸಮಾರಂಭ
ತಾ14-11-2014ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ ಜರಗಿತು.ಅಧ್ಯಕ್ಷ ಸ್ಥಾನವನ್ನುಪಿ.ಟಿ..ಅದ್ಯಕ್ಷರಾದ ಶ್ರೀಯುತ ರವೀಶ್. ಭಟ್ ಆಟಿಕುಕ್ಕೆ ಅಲಂಕರಿಸಿದರು.ಶ್ರೀಮತಿ ಜಯಲಕ್ಷ್ಮಿಭಟ್.ದೀಪಬೆಳಗಿಳಸಿ ಸಮಾರಂಭವನ್ನು ಉದ್ಘಾಟಿಸಿದರು.
ಸಹಾಯಕ ಅಧ್ಯಾಪಕರಾದ ಶ್ರೀಯುತ ವಿಘ್ನೇಶ್ವರ ಕೆದುಕೋಡಿ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು.ಭಾರತದ ಮೊದಲ ಪ್ರಧಾನಿ ನೆಹರುರವರ ಸಾಧನೆಗಳನ್ನು ವಿವರಿಸಿದರು. ಬಳಿಕ ಮಕ್ಕಳ ಪಾಲನೆಯಲ್ಲಿ ಹೆತ್ತವರ ಪಾತ್ರ ದ ಬಗ್ಗೆ ಚರ್ಚೆಗೆ ಅವಕಾಶ ನೀಡಿದರು.ಹೆತ್ತವರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತು.
ಗಣಿತ ಅಧ್ಯಾಪಕರಾದ ಶ್ರೀಧರ.ಭಟ್.ಗಣಿತೋತ್ಸವದ ಬಗ್ಗೆ ಮಾಹಿತಿ ನೀಡಿದರು.ಗಣಿತದಲ್ಲಿ ಮಕ್ಕಳಿಗೆ ಆಸಕ್ತಿಯನ್ನು ಹೇಗೆ ಹೆಚ್ಚಿಸಬಹುದೆಂದು ಚರ್ಚೆ ನಡೆಸಿದರು.
ಮುಖ್ಯೋಪಾಧ್ಯಾಯರಾದ ವಿ.ಶ್ರೀಕಾಂತ.ಇವರು ಸ್ವಾಗತಿಸಿದರು.ಶ್ರೀಧರ ಭಟ್.ವಂದಿಸಿದರು.












No comments:

Post a Comment